ಹುಟ್ಟು

ಹಕ್ಕಿ ಫಡಫಡಿಸಿ ಹಾರಿ
ನೀಲಿ ಆಕಾಶದ ಪರದೆ
ತುಂಬ ಹುಚ್ಚೆದ್ದ ಪದಗಳು
ಬೆಳಕಿನ ಕಿರಣಗಳೊಂದಿಗೆ ಜಾರಿ
ಹಿಡಿದು ಬಿಂಬಿಸಿದ ಹುಲ್ಲುಗರಿ
ತುಂಬ ಇಬ್ಬನಿ ಕವಿತೆಗಳ ಸಾಲು.

ಮೂಡಿದ ಹರುಷ ವೃತಸ್ನಾನ
ಮುಗಿಸಿ ಎಳೆ ರಂಗೋಲಿ ಎಳೆದ
ಬೆರಳುಗಳು ನಾದಿ ಹದ ಮಾಡಿದ
ರೊಟ್ಟಿಗಳು ಭೂಮಿ ಗೋಲ ತಿರುಗಿ
ಹಬ್ಬದ ಬಾಳೆ ತುಂಬ ಭಕ್ಷ್ಯಗಳ ಸಾಲು.

ಉತ್ತಿ ಬಿತ್ತಿ ಉಂಡು ಹದ ಮಾಡಿದ
ಪಾಕ ರಸಪಾಕಗಳ ಪ್ರಸನ್ನತೆ
ಹರಿದು ರಸಗಳ ಸೃವಿಸಿದ ಭಾವ
ಅನುಭಾವಗಳ ಸಾಲು ಹಣತೆಗಳು
ಬಿಂಬಿಸಿ ಕಾಂತಿಗಳ ಕಣ್ಣತುಂಬ ದೀಪಗಳ ಸಾಲು.

ಮರಗಿಡಗಳ ಸುಳಿಗಾಳಿ ಬೀಸಿ
ಭೂಮಿ ಕವಿತೆಯ ಸಾಲು ಮಾಡಿ
ಬತ್ತಿದ ಪಟ್ಟಿಯಲಿ ಹಸಿರು ಮೊಳಕೆ
ಚಿಗುರಿದ ಜೀವಭಾವ ಜಲವ
ಹೀರಿ ಹೀರಿ ಚೀಪಿತ ತಾಯ ಮೊಲೆ ಹಾಲು.

ಹೊಸ ಹೊಸ ರೂಹುಗಳ ಸಂಕೇತ
ಮುದಗೊಂಡು ಹದ ಪಾಕ ಕುದಿದು
ಘಮ್ಮೆಂದು ಹೊಮ್ಮಿ ಚಿಮ್ಮುವ ರಾಗಗಳು
ಬದುಕು, ಕವಿತೆ, ಖುಷಿ, ಹುಟ್ಟುವ ಕಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಳೆನ್ನ ಮನದನ್ನೆ
Next post ಸೂರ್ಯಪ್ರಸ್ಥಾನ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys